ಸಂವಿಧಾನವನ್ನು ಸಂಭ್ರಮಿಸುತಾ ಯುವ ಜನ ಹಬ್ಬ
ದೃಶ್ಯ, ಕಾವ್ಯ, ನಡೆ, ನುಡಿ

ಪ್ರಸ್ತಾವನೆ
ಸಂವಾದ ಯುವಸಂಪನ್ಮೂಲ ಕೇಂದ್ರ ಮಂಗಳೂರು ಮತ್ತು ಯುವ ಮುನ್ನಡೆ ಮಂಗಳೂರು (ಸಂವಾದದ ಯುವ ಮುಂದಾಳುಗಳು ಸಾಮಾಜಿಕ ಸ್ಪಂದನೆಗಾಗಿ ರೂಪಿಸಿಕೊಂಡಿರುವ ಯುವವೇದಿಕೆ) ಸೇರಿಕೊಂಡು ಪ್ರತಿವರುಷ ಯುವಜನರ ಹಕ್ಕುಗಳಿಗಾಗಿ ಮತ್ತು ಅವರ ಸಬಲಿಕರಣದ ಭಾಗವಾಗಿ ಯುವಾಂದೋಲನ ಮತ್ತು ಅವರ ಕೆಲಸಗಳನ್ನು ಗುರುತಿಸಲು, ಸಂಭ್ರಮಿಸಲು ಯುವಜನ ಹಬ್ಬ ಮಾಡುತ್ತಿರುತ್ತೇವೆ. ಈ ವರುಷ ನಾವು “ ಕರ್ತವ್ಯ ಪಾಲನೆಗಾಗಿ ಯುವಜನರ ಅಭಿವ್ಯಕ್ತಿ “ ಎಂಬ ಶೀರ್ಷಿಕೆಯಡಿಯಲ್ಲಿ ಸಂವಿಧಾನವನ್ನು ಸಂಭ್ರಮಿಸಲೆಂದು ಯುವಜನ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು.

 

ಯುವಜನ ಹಬ್ಬದ ಹಿನ್ನಲೆ

ಹಿಂದೆ ಮತ್ತು ಮುಂದೆಂದಿಗಿಂತಲು ಪ್ರಸ್ತುತ ವಿಶ್ವದಲ್ಲಿ ಯುವಜನ ಸಂಖ್ಯೆ ಹೆಚ್ಚು ಇರುವ ಕಾಲಘಟವಾಗಿದೆ. ಕರ್ನಾಟಕದಲ್ಲಿರುವ 15 ರಿಂದ 29ವರ್ಷ ವಯಸ್ಸಿನವರ ಸಂಖ್ಯೆ ಸುಮಾರು 1.7 ಕೋಟಿ ಇದ್ದಾರೆ. ಆದರೆ ಕೋಮುವಾದ, ಲೈಂಗಿಕ ದೌರ್ಜನ್ಯ, ಹಿಂಸೆ, ನಿರುದ್ಯೋಗ, ಹವಮಾನ ಬಿಕ್ಕಟ್ಟು, ಪ್ರಾಕೃತಿಕ ವಿಕೋಪಗಳು ಇವೇ ಮೊದಲಾದವುಗಳಿಂದ ಒಟ್ಟು ಯುವಜನರ ಭವಿಷ್ಯ ಬಿಕ್ಕಟ್ಟಿನಲ್ಲಿದೆ. ಯಾರಿಗೂ ಸಂವಿಧಾನದ ಬದ್ದ ಹಕ್ಕುಗಳು ದೊರಕುತಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಹಕ್ಕುಗಳು ಮತ್ತು ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖಗಳು, ನಾವು ನಮ್ಮ ಸಂವಿಧಾನ ಬದ್ದ ಕರ್ತವ್ಯಗಳನ್ನು ಪಾಲಿಸುತ್ತಿದ್ದೇವೆಯೇ? ಎಂದು ನಾವು ನೋಡಬೇಕಾದದ್ದು ಬಹಳ ಮುಖ್ಯ. ಹಾಗಾಗಿ ನಮ್ಮ ಸಂವಿಧಾನ ಬದ್ಧ ಕರ್ತವ್ಯಗಳನ್ನು ಪಾಲಿಸುವಂತೆ ಪ್ರೇರೇಪಿಸಲು, ಜಾಗೃತಿ ಮೂಡಿಸಲು ಹಾಗೂ ಮುಖ್ಯವಾಗಿ ನಮ್ಮ ಕರ್ತವ್ಯಗಳನ್ನು ಸಂಭ್ರಮಿಸಲು ಈ ಯುವಜನ ಹಬ್ಬವನ್ನು ರೂಪಿಸಲಾಗಿತ್ತು.

ಪ್ರಸ್ತುತ ಭಾರತದ ಸಂವಿಧಾನವು 11 ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ. ಸಂವಿಧಾನದ ಮೌಲ್ಯ ಅದರ ತಿರುಳು ಎನ್ನುವುದು ನಮಗೆಲ್ಲರಿಗೂ ಗೊತ್ತು. ನಾವು ಈ ಬಾರಿ

ಈ ಕೆಳಗಿನ ನಮ್ಮ ಕರ್ತವ್ಯಗಳಾದ
• 51A(E)*ವಿವಿಧ ಧರ್ಮ, ಭಾಷೆ ಮತ್ತು ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದದಿಂದ ಇರುವುದು, ಮಹಿಳೆಯ ಗೌರವದಿಂದ, ಸಮಾನತೆಯಿಂದಿರುವುದು.
• 51A(G) ದೇಶದ ಕಾಡು, ವನ್ಯ ಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ ಬೆಳೆಸುವುದು,
• 51A(H) ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದು; ಪ್ರಶ್ನೆ ಮಾಡುವ ಮತ್ತು ಬದಲಾವಣೆಗೆ ಒಡ್ಡಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುವುದು

ಇವೇ ನಾಲ್ಕು ಕರ್ತವ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಯುವಜನ ಹಬ್ಬವನ್ನು ದೃಶ್ಯ, ಕಾವ್ಯ, ನಡೆ, ನುಡಿ ಇವೇ ನಾಲ್ಕು ಮಾಧ್ಯಮದ ಮೂಲಕ ಜಿಲ್ಲೆಯ ಬೇರೆ ಬೇರೆ ಸ್ತರದ ಯುವಜನರನ್ನು ತಲುಪಲು ಎರಡುದಿನದ ಹಬವನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲದಿನ:ಸಿನಿಮಾ ಹಬ್ಬ ದಿನಾಂಕ 28.10.2022 ಸಮಯ: 10.00ರಿಂದ 4. 30ಯವರೆಗೆ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜು, ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಎರಡನೇ ದಿನ ದಿನಾಂಕ 29.10.2022ರಂದು “ಕರ್ತವ್ಯ ಪಾಲನೆಗಾಗಿ ಯುವಜನರು ಅಭಿವ್ಯಕ್ತಿಗಾಗಿ 10.00ರಿಂದ 4. 30ಯವರೆಗೆ ಮಂಗಳೂರಿನ ಸ್ಕೂಲ್ ಆಪ್ ಸೋಷಲ್ ವರ್ಕ್ ರೋಶನಿ ನಿಲಯದ ಮರಿಯ ಪೈವಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

 

ಮೊದಲ ದಿನ - ಸಿನಿಮಾ ಹಬ್ಬ

 

ದಿನಾಂಕ 28.10.2022ರಂದು ಸಂತ ಅಲೋಷಿಯಸ್ ಕಾಲೇಜಿನ ಸಭಾಂಗಣದಲ್ಲಿ ಯುವಜನ ಹಬ್ಬದ ಭಾಗವಾಗಿ ಸಿನಿಮಾ ಹಬ್ಬವನ್ನು ಆಚರಿಸಲಾಯಿತು. ಸಂವಿಧಾನ ಬದ್ಧ ಕರ್ತವ್ಯಗಳನ್ನು ಪಾಲಿಸುವಂತೆ ನಮಗೆ ನಾವೇ ಪ್ರೇರೇಪಿಸಲು, ಜಾಗೃತಿ ಮೂಡಿಸಲು ಹಾಗೂ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಅವುಗಳನ್ನು ಸಂಭ್ರಮಿಸಲು ಸಂವಿಧಾನದ ಮೌಲ್ಯಗಳನ್ನು ಹೇಳುವಂತಹ ಅಪರೂಪದ ಸಿನಿಮಾಗಳನ್ನು ಸಿನಿಮಾ ಹಬ್ಬದ ಭಾಗವಾಗಿ ಪ್ರದರ್ಶಿಸಲಾಯಿತು.

ಈ ಸಿನಿಮಾ ಹಬ್ಬವನ್ನು ಸಂತ ಅಲೋಷಿಯಸ್ ಪದವಿ ಕಾಲೇಜಿನ ಫಾಂಶುಪಾಲರಾದ. ರೆ. ಫಾ. ಡಾ. ಪ್ರವೀಣ್ ಮಾರ್ಟಿಸ್ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಮುರಳಿ ಮೋಹನ್ ಕಾಟಿ, ಫಾಕಲ್ಟಿ ಸಂವಾದ ಬದುಕು ಕಲಿಕಾ ಕೇಂದ್ರ ಶುಭ ಹಾರೈಸುತ್ತಾ ಸಿನಿಮಾಗಳು ಜನಸಾಮಾನ್ಯರ ಬದುಕಿಗೆ ಹೇಗೆ ಪ್ರೇರಣೆಯಾಗುತ್ತದೆ ಎನ್ನುವುದನ್ನು ತಿಳಿಸಿದರು. ಯುವಮುನ್ನಡೆಯ ಪ್ರತಿನಿಧಿಯಾದ ಕುಮಾರಿ ಪಕೃತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಹೇಗೆ ಸಂವಾದದ ಅರಿವಿನ ಪಯಣದಲ್ಲಿ ತನ್ನ ಮತ್ತು ತನ್ನ ಒಡನಾಡಿಗಳ ಬದುಕಿನಲ್ಲಿ ಆದ ಬದಲಾವಣೆಗಳು, ಪ್ರೇರಣೆಗೊಂಡಂತಹ ಅಂಶಗಳನ್ನು ಅವರು ಯುವಜನರ ಮುಂದಿಟ್ಟು ಯುವಜನರು ಪಠ್ಯ ಪುಸ್ತಕವು ನಮಗೆ ಶೈಕ್ಷಣಿಕ ಮುನ್ನಡೆಗೆ ಕಾರಣವಾದರೆ, ಸಂವಾದದಲ್ಲಿ ತಾನು ಕಲಿತ ಪಾಠಗಳು ಬದುಕಿನ ಮುನ್ನಡೆಗೆ ಕಾರಣವಾಗಿದೆ ಎನ್ನುವುದನ್ನು ತಿಳಿಸಿದರು. ಹಾಗೂ ಸಿನಿಮಾ ಹಬ್ಬಕ್ಕೆ ಶುಭಹಾರೈಸಿದರು.

ಅಂದು ಪ್ರದರ್ಶನ ಗೊಂಡ ಸಿನಿಮಾಗಳು ಈ ಕೆಳಗಿನಂತಿದೆ.

ಸಿನಿಮಾ “ಬಾಲ್ಡ್‌ ರೈಸ್‌”ನಿರ್ದೇಶಕರು ಜಯಂತ್ ನಿಟ್ಟೆಡೆ (ತುಳು ಬಾಷೆ) ಪ್ರಾದೇಶಿಕ ಆಹಾರ ಸಂಸ್ಕೃತಿಗೆ ಅನುಗುಣವಾಗಿ ಪಡಿತರ ಆಹಾರದ ಹಂಚಿಕೆಯಾಗಬೇಕು ಎನ್ನುವುದನ್ನು ಬಹಳ ಮಾರ್ಮಿಕವಾಗಿ ಹೇಳುವ ಸಿನಿಮಾ ಯುವಜನರಿಗೆ ಬಹಳ ಆಪ್ತವಾಯಿತು.

ಸಿನಿಮಾ “ಆಕ್ಟ್‌ ೧೯೭೮” ನಿರ್ದೇಶಕರು ಮಂಸೂರೆ( ಕನ್ನಡ ಬಾಷೆ): ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಹೇಗೆ ಭ್ರಷ್ಟಚಾರ ಆಳವಾಗಿ ಬೇರೂರಿದೆ. ಮತ್ತೆ ಅದಕ್ಕೆ ಅಧಿಕಾರ ವರ್ಗ ನೀಡುವ ಸಮರ್ಥನೆ, ಮತ್ತು ಮೌನವಾಗಿರುವುದು ಅದಕ್ಕೆ ಪರೋಕ್ಷವಾಗಿ ಬೆಂಬಲಿಸಿದಂತೆ ಎನ್ನುವ ಚಿಂತನೆಗೆ ಸಿನಿಮಾ ಹಚ್ಚಿತ್ತು. ಹಾಗೂ ಒರ್ವ ಗರ್ಬಿಣಿ ಮಹಿಳೆ ಅನಿವಾರ್ಯವಾಗಿ ಭ್ರಷ್ಟಚಾರವನ್ನು ತ್ರೀವವಾಗಿ ಪ್ರತಿಭಟಿಸಿ ಇಡೀ ಸರಕಾರ, ಜನಸಮಾನ್ಯರ ಗಮನಸೆಳೆಯುವ ರೀತಿ, ಇಂಥ ವ್ಯವಸ್ಥೆಯ ವಿರುದ್ದ ತಿರುಗಿ ಬಿದ್ದರೆ ಏನೆಲ್ಲಾ ಆಗಬಹುದು ಎಂಬುದನ್ನು ನಿರ್ದೇಶಕ ಮಂಸೂರೆಯವರು ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದರು.

ಯುವಜನರನ್ನು ಭ್ರಷ್ಚಾಚಾರದ ಕುರಿತು ಚಿಂತನೆಗೆ ಹಚ್ಚಿತ್ತು. ಅಷ್ಟೇ ಅಲ್ಲ ಸಂವಿಧಾನದ ಬದ್ಧವಾದ ನಾಗರಿಕರ ಹಕ್ಕುಗಳು, ಮೌಲ್ಯಗಳಿಗೆ ಒರೆಹಚ್ಚಿತ್ತು.

ಸಿನಿಮಾ “ಮಾ” ನಿರ್ದೇಶಕರು ಸರ್ಜುನ್ ಕೆ.ಎಂ. ( ತಮಿಳು) : ಹದಿಹರೆಯದ ಲೈಂಗಿಕ ಆಕರ್ಷಣೆ ಮತ್ತು ಗರ್ಬಪಾತದಂತಹ ಸೂಕ್ಷ್ಮವಿಷಯವನಿಟ್ಟುಕೊಂಡು ಹೆಣೆದಿರುವ ಸಿನಿಮಾದಲ್ಲಿ ತಾಯಿಯಾದವಳು, ಸಾಂಪ್ರಾದಯಿಕ, ಪುರುಷ ಪ್ರದಾನ ಸಮಾಜದಲ್ಲಿ ತನ್ನ ಮಗಳನ್ನು ಹೇಗೆ ಕಾಪಾಡುತ್ತಾಳೆ, ಮಗಳಿಗೆ ತಪ್ಪುಗಳನ್ನು ತಿದ್ದಿಕೊಂಡು ಮತ್ತು ಬದುಕು ಕಟ್ಟಿಕೊಳಲು ಜತೆಯಾಗುವ ಸನ್ನಿವೇಶ ಬಹಳ ಮನಕಲುಕುತ್ತದೆ. ಮತ್ತೆ ಮಹಿಳೆಯ ಚೈತ್ಯನ್ಯ, ನಿಭಾಯಿಸುವ ರೀತಿನೀತಿಗಳು ಎಷ್ಟು ಜೀವಪರವಾಗಿದೆ ಎನ್ನುವ ಸಂದೇಶವನ್ನು ಯುವಜನರಿಗೆ ಸಿನಿಮಾ ಕಟ್ಟಿಕೊಟ್ಟಿತ್ತು.

ಈಶ್ವರ್ ಅಲ್ಲಾ ಏಕ್ ಹೆ( ಹಿಂದಿ): ಧರ್ಮದ ಸಂಕೀರ್ಣತೆಯನ್ನು ಮಗುವಿನ ದೃಷ್ಟಿಯಿಂದ ನೋಡುತ್ತಾ ಸರಳವಾಗಿ ನೋಡುವ ಪರಿಯಂತು ಯುವಜನರಿಗೆ ಬಹಳ ಇಷ್ಟವಾಯಿತು.

ಹೀಗೆ ಒಟ್ಟು ನಾಲ್ಕು ಸಿನಿಮಾಗಳ ಮೂಲಕ ಸಂವಿಧಾನ ಬದ್ದ ಕರ್ತವ್ಯವಾದ 51ಂ(ಇ)*ವಿವಿಧ ಧರ್ಮ, ಭಾಷೆ ಮತ್ತು ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದದಿಂದ ಇರುವುದು, ಮಹಿಳೆಯ ಗೌರವದಿಂದ, ಸಮಾನತೆ- ಕುರಿತು ಯುವಜನರೊಂದಿಗೆ ಬಹಳ ಪರಿಣಾಮಕಾರಿ ದೃಶ್ಯ ಮಾಧ್ಯಮವಾದ ಸಿನಿಮಾದ ಮೂಲಕ ತಮ್ಮ ಕರ್ತವ್ಯಕ್ಕೆ ಬದ್ಧರಾಗುವಂತೆ ಕರೆನೀಡಿತು.

ಈ ಸಿನಿಮಾ ಹಬ್ವವನ್ನು ಡಾಕ್ಯೂಮೆಂಟರಿ ಫಿಲ್ಮಮ್ ಮೇಕರ್ ಹಾಗೂ ಪ್ರಾಕ್ಟಿಷನರ್ ಆದ ಶ್ರೀ ನಟೇಶ್ ಉಳ್ಳಾಲ್ ನಿರ್ವಹಿಸಿದರು. ಸಿನಿಮಾ ಹಬ್ಬ ಯುವಜನರಿಗೆ ಸಂವಿಧಾನದ ಮೌಲ್ಯಗಳ ಕುರಿತು, ನಮ್ಮ ಸಂವಿಧಾನದ ಹಕ್ಕು- ಕರ್ತವ್ಯಗಳ ಕುರಿತು ಯೋಚನೆ, ಚಿಂತನೆಗೆ ಹಚ್ಚಿತು. ಮೊದಲ ಸಿನಿಮ ಬಾಲ್ಡ್‌ ರೈಸ್‌ ನಿರ್ದೇಶಕರಾದ ಜಯಂತ್ ನಿಟ್ಟೆಡೆ ಹಾಜರಿದ್ದು, ಯುವಜನರೊಂದಿಗೆ ಸಂವಾದ ನಡೆಸಿದರು.

ಒಟ್ಟಿನಲ್ಲಿ ಸ್ಥಳಿಯ ಬಾಷೆಯಾದ ತುಳುವಿನಿಂದ ಆರಂಭಿಸಿ, ಮುಂದೆ ತಮಿಳು, ಕನ್ನಡ ನಂತರ ಹಿಂದಿ ಭಾಷೆಯ ಮೂಲಕ ಹಳ್ಳಿಯಿಂದ ದಿಲ್ಲಿಯವರೆಗಿನ ಬಹು ಭಾಷೆ, ಬಹು ಸಂಸ್ಕೃತಿ, ಬಹುಧರ್ಮ, ಹೀಗೆ ಸಂವಿಧಾನದ ಅಪ್ಪಟ ಮೌಲ್ಯಗಳಿಗೆ ದಕ್ಕೆ ಬಂದಾಗ ಜನಸಾಮಾನ್ಯರ ಪ್ರತಿಕ್ರಿಯೆ, ಯೋಚನೆಯನ್ನು, ಅವರ ಕರ್ತವ್ಯಗಳನ್ನು ಸಿನಿಮಾಗಳು ನೆನಪಿಸಿದವು ಇಡೀ ಸಿನಿಮಾ ಹಬ್ಬವನ್ನು ಮಗು ಮತ್ತು ಮಹಿಳೆಯ ಕಣ್ಣಿನಿಂದ ನೋಡಿದ್ದು ಇನ್ನೂ ಅರ್ಥಪೂರ್ಣವೆನಿಸಿತು ಎಂದು ಇಡೀ ಸಿನಿಮಾ ಹಬ್ಬವನ್ನು ನಿರ್ವಹಿಸಿದ ಶ್ರೀ ನಟೇಶ್ರವರು ವಿಶ್ಲೇಷಿಸಿದರು.

ಅಂತೆಯೇ ಯಾವುದೇ ಸಿನಿವನ್ನು ಸಾಗರದಂತೆ ಎಲ್ಲವನ್ನು ತೆರೆದ ಮನಸ್ಸಿನಿಂದ ನೋಡುವಂತೆ, ಹಾಗೂ ಸಿನಿಮಾ ನೋಡುವ ವೇಳೆ ಪ್ರೇಕ್ಷಕರು ತಮ್ಮ ಜವಾಬ್ದಾರಿಯಾದ ಪೂರ್ತಿ ಸಿನಿಮಾವನ್ನು ನೋಡುವಂತೆ, ಪೂರ್ತಿಯಾಗಿ ಎಲ್ಲಾ ಹೆಸರುಗಳ ಪಟ್ಟಿಗಳನ್ನು ಗಮನಿಸುವಂತೆ, ಏಕೆಂದರೆ, ಒಂದು ಸಿನಿಮಾದ ಹಿಂದೆ ನೂರಾರು ತಂತ್ರಜ್ಞರು, ಶ್ರಮಿಕರು ದುಡಿದಿರುತ್ತಾರೆ. ಎನ್ನುವಂತಹ ಕಿವಿಮಾತುಗಳು ಯುವಜನರಿಗೆ ಬಹಳ ಪ್ರೇರಣೆಯಾಯಿತು ಎಂದು ಯುವಜನರು ತಮ್ಮ ಅಭಿಪ್ರಾಯ ಹಂಚಿಕೆಯ ಸಮಯದಲ್ಲಿ ವ್ಯಕ್ತ ಪಡಿಸಿದರು.

 

ಎರಡನೇ ದಿನ

 

 

 

 

 

ಎರಡನೇ ದಿನ ದಿನಾಂಕ 29.10.2022 ಸಮಯ: 10.00ರಿಂದ ೪ 30ಯವರೆಗೆ ಮಂಗಳೂರಿನ ಸ್ಕೂಲ್‌ ಆಪ್‌ ಸೋಷಲ್‌ ವರ್ಕ್‌ ರೋಶನಿ ನಿಲಯದ ಮರಿಯ ಪೈವಾ ಸಭಾಂಗಣದಲ್ಲಿ “ಕರ್ತವ್ಯ ಪಾಲನೆಗಾಗಿ ಯುವಜನರ ಅಭಿವ್ಯಕ್ತಿ” ಎಂಬ ಕಾರ್ಯಕ್ರಮ ನಡೆಯಿತು.

ಎರಡನೇ ದಿನದ ಹಬ್ಬವನ್ನು ಡಾ. ನಾಗರತ್ನ ಕೆ.ವಿ, ಸಂಯೋಜಕರು ಎನ್.‌ ಎಸ್.‌ ಎಸ್.‌ ಮಂಗಳೂರು ವಿಶ್ವವಿದ್ಯಾನಿಲಯ ಇವರು ಉದ್ಘಾಟಿಸಿದರು. ಯುವಜನ ಹಬ್ಬದ ಮುಖ್ಯ ಅತಿಥಿಗಳಾದ ವಿ೪ ಮಾಧ್ಯಮದ ಪ್ರಧಾನ ಸಂಪಾದಕರಾದ ಶ್ರೀ ತಾರನಾಥಗಟ್ಟಿಯವರು ಯುವಜನರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರ ತುರ್ತು ಮತ್ತು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರ ಅಗತ್ಯತೆಯ ಕುರಿತು ಯುವಜನರಿಗೆ ಕಿವಿಮಾತು ಹೇಳಿದರು. ಅಂತೆಯೇ ಸೂಲ್ಕ್‌ ಆಫ್‌ ಸೋಷಲ್‌ ವರ್ಕ್‌ ರೋಶನಿ ನಿಲಯ ಮಂಗಳೂರು ಇದರ ಉಪ ಪ್ರಾಂಶುಪಾಲರಾದ ಡಾ. ಜೆನಿಸ್‌ರವರು ಜೀವನದ ಅತಂತ್ಯ ಉತ್ಪಾದಕ, ಉತ್ಸಾಹ ಭರಿತ ದಿನಗಳೇ ಯುವ ವಯಸ್ಸು. ಹಾಗಾಗಿ ಅದನ್ನು ಸಮೃದ್ದವಾಗಿ ಬಳಸುವಂತೆ ಯುವಿಗಳಿಗೆ ಕರೆನೀಡಿದರು.

ಕಾವ್ಯಾಭಿವ್ಯಕ್ತಿ:
ಪರಿಸರ, ಮಹಿಳೆ ಇವೇ ವಿಷಯಗಳನ್ನು ಒಳಗೊಂಡ ಒಟ್ಟು ೧೫ ಕವನಗಳನ್ನು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ವಾಚಿಸಿದರು. ಡಾ. ಮುಸ್ತಫಾರವರು ಎಲ್ಲಾ ಕವನಗಳ ಸತ್ವವನ್ನು ಮತ್ತೆ ಕೇಳುಗರಿಗೆ ತಲುಪಿಸುತ್ತಾ ಸಾಮಾಜದ ಬದಲಾವಣೆಗೆ, ಬಂಡವಾಳಶಾಹಿ ಯೋಜನೆ, ಯೊಚನೆಗಳನ್ನು ಪ್ರಶ್ನಿಸಬಹುದು. ಮಹಿಳೆಯರ ಸಮಸ್ಯೆಗಳಿಗೆ ಕಿವಿಯಾಗಬಹದು ಎಂದು ವಿಶ್ಲೇಷಿಸಿ ಕಾವ್ಯಭಿವ್ಯಕ್ತಿಯನ್ನು ಬಹಳ ಅರ್ಥಪೂರ್ಣವಾಗಿ ನಿರ್ವಹಿಸಿದರು.

ನಡೆ ನುಡಿ: ಹಸಿರು ಉದ್ಯಮ

ಗೋಷ್ಟಿಯನ್ನು ನಮ್ಮ ಸಂವಿಧಾನ ಬದ್ಧ ಕರ್ತವ್ಯಗಳಲ್ಲಿ ಒಂದಾದ “51A(G) ದೇಶದ ಕಾಡು, ವನ್ಯ ಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ ಬೆಳೆಸುವುದು” ಕೇಂದ್ರೀಕೃತವಾಗಿ ರೂಪಿಸಲಾಗಿತ್ತು. ಹಾಗಾಗಿ ಪರಿಸರ ಉಳಿಸಲು ಸಂವಾದದ ಯುವ ಒಡನಾಡಿಗಳ ನಡೆ- ನುಡಿಗಳನ್ನು ಇಲ್ಲಿ ವ್ಯಕ್ತ ಪಡಿಸುವುದು ಮತ್ತು ಅದರ ಅಗತ್ಯತೆಯನ್ನು ತಜ್ಞರಿಂದ ವಿಷಯ ಮಂಡಿಸುವುದು ಈ ಗೋಷ್ಠಿಯ ಉದ್ದೇಶವಾಗಿತ್ತು.

ಅದರಂತೆ ಈ ಗೋಷ್ಠಿಯಲ್ಲಿ ಕದಿಕೆ ಟ್ರಸ್ಟ್‌ನ ಅಧ್ಯಕ್ಷರಾದ ಶ್ರಿಮತಿ ಮಮತಾ ರೈಯವರು “ಹಸಿರು ಜೀವನೋಪಾಯಗಳು (green jobs)" ವಿಚಾರವಾಗಿ ಯುವಜನರನ್ನು ಉದ್ದೇಶಿಸಿ ಮಾತಾಡಿದರು. ಅವರ ಮಾತುಗಳು ಖಂಡಿತವಾಗಿ ಇಲ್ಲಿ ದಾಖಲೀಸಲೇ ಬೇಕು. ಅವರ ಒಟ್ಟು ಮಾತಿನ ಸಾರಾಂಶ ಹೀಗಿತ್ತು. 2050 ರ ಒಳಗೆ ಇಂಗಾಲದ ಒಟ್ಟು ಹೊರಸೂಸುವಿಕೆ ಶೂನ್ಯ (net zero carbon emission) ಆಗಬೇಕಾದರೆ ಪ್ರತಿ ರಾಷ್ಟ್ರಗಳು ಹಸಿರು ಆರ್ಥಿಕತೆಗೆ (green economy) ತೆರೆದುಕೊಳ್ಳಲೇ ಬೇಕಾಗುತ್ತದೆ. ಹಾಗೆ ಮಾಡುವಾಗ ಈಗಿರುವ ಯಾವುದೇ ಉದ್ದಿಮೆ ಅಥವಾ ಕ್ಷೇತ್ರಗಳಲ್ಲಿ ಹಲವಾರು ಹಸಿರು ಉದ್ಯೋಗಗಳು ಸೃಷ್ಟಿ ಆಗುತ್ತದೆ. ಹಸಿರು ಕೆಲಸ ಅಂದರೆ ನೇಕಾರಿಕೆ, ಕುಂಬಾರಿಕೆ, ಸಹಜ ಕೃಷಿ ಮಾತ್ರ ಅಲ್ಲ. ಆದರೆ ನಮ್ಮ ಯುವ ಜನತೆಗೆ ಈ ಕುರಿತು ಸರಿಯಾದ ಮಾಹಿತಿ ಅಥವಾ ಅದಕ್ಕೆ ಬೇಕಾದ ಕೌಶಲ್ಯಗಳ ತರಬೇತಿ ಇಲ್ಲ. ಹಸಿರು ಆರ್ಥಿಕತೆ ಎಲ್ಲರಿಗೂ ಸಮಾನ ಅವಕಾಶವನ್ನು ನೀಡುತ್ತದೆ. ಕೆಲವೇ ಉದ್ದಿಮೆಗಳ ಏಕ ಸಾಮ್ಯತೆಯ ಬದಲು ಹಲವು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಬೆಂಬಲ ನೀಡಿದರೆ ಹಸಿರು ಆರ್ಥಿಕತೆಗೆ ಬಲ ಬರುತ್ತದೆ. ನಮ್ಮ ತಲೆಮಾರಿನ ಜೀವನ ಶೈಲಿಯ ಪರಿಣಾಮ ಮಕ್ಕಳ ಭವಿಷ್ಯ ಆತಂಕಕ್ಕೆ ಒಳಗಾಗಿದೆ.

ನಾಳಿನ ನೆಮ್ಮದಿಯ ಬಾಳಿಗಾಗಿ ಯುವ ಜನತೆಗೆ ಭರವಸೆ ನೀಡುವಂತಹ ಪ್ರಯತ್ನಗಳು ನಮ್ಮಿಂದ ಆಗಬೇಕಾಗಿದೆ. ಆದರೆ ಅಂತಹ ಗಂಭೀರ ಪ್ರಯತ್ನಗಳು (ಸರಕಾರ ಮತ್ತು ಇತರ ಸಂಘ ಸಂಸ್ಥೆಗಳಿಂದ) ಹೆಚ್ಚಾಗಿ ಕಾಣುತ್ತಿಲ್ಲ

ಸಂವಾದ ಕಾರ್ಯಕ್ರಮ ಹಸಿರು ಕೆಲಸಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು

ಲಾವಣ್ಯ ಜ್ಯೋತಿಗುಡ್ಡೆ ತಮ್ಮ “ಬಣ್ಣದಾರ”,ಹರ್ಷಿತ ತಮ್ಮ “ಹೆಣಿಗೆ”, ಮತ್ತು ಆಕಾಶ್ ಕುಡ್ಲ ತಮ್ಮ ಉದ್ಯಮವಾದ “ಆ ಟ್ರಿʼ- ಹೀಗೆ ಕ್ರಮವಾಗಿ ತಮ್ಮ ಹಸಿರು ಉದ್ಯಮಗಳ ಕುರಿತಾಗಿ ಕುರಿತು ಕಿರು ಮಾಹಿತಿ ನೀಡಿದರು.

ಅವರ ಮಾತುಗಳನ್ನು ಆಲಿಸಿದ ಮಮತಾ ರೈಯವರು “ಕಿರಿಯ ವಯಸ್ಸಿನಲ್ಲಿ ಹಿರಿಯ ಆಶಯ ಹೊಂದಿರುವ ಯುವ ಜನರನ್ನು ನೋಡಿ ಖುಷಿ ಆಯಿತು. ಹಸಿರು ಉದ್ಯಮದಲ್ಲಿ ತೊಡಗಿರುವ ಇಂತಹ ಯುವಕರಿಗೆ ಬೆಂಬಲ ನೀಡುವ ಮೂಲಕ ಹೆಚ್ಚು ಹೆಚ್ಚು ಮಂದಿ ಇಂತಹ ಪ್ರಯತ್ನ ಮಾಡಲು ಪ್ರೇರಣೆ ನೀಡಬೇಕು. ಇಷ್ಟನ್ನಾದರೂ ಮಾಡಲು ನಮ್ಮಿಂದ ಖಂಡಿತ ಸಾಧ್ಯವಿದೆ” ಎನ್ನುವ ಪ್ರೋತ್ಸಾಹದ ಮಾತುಗಳನ್ನಾಡಿದರು. ಮಂಗಳೂರಿನ ಸುತ್ತ ಮುತ್ತಲಿನ ಕಾಲೇಜುಗಳ ಯುವಜನತೆ ಸಕ್ರೀಯವಾಗಿ ಭಾಗವಹಿಸಿದ್ದು ಭರವಸೆ ಮುಂದಿನ ಭವಿಷ್ಯದ ಕುರಿತು ಭರವಸೆ ಮೂಡಿದೆ ಎನ್ನುವ ಮಾತುಗಳು ಸಂವಾದ ತಂಡಕ್ಕೆ ಪ್ರೇರಣೆಯಾಯಿತು.

ಈ ಗೋಷ್ಠಿಯನ್ನು ಸಂವಾದದ ಯುವಜನ ಕಾರ್ಯ ವಿಭಾಗದ ಸಂಚಾಲಾಕರಾದ ಶ್ರೀ ಜನಾರ್ಧನ ಕೆಸರಗದ್ದೆಯವರು ನಿರ್ವಹಿಸಿದರು.

ವಸ್ತು ಪ್ರದರ್ಶನ: ಹಸಿರು ಉದ್ಯಮ ನಡೆಸುತ್ತಿರುವ ಸಂವಾದದ ಒಡನಾಡಿಗಳು ತಮ್ಮ ಉದ್ಯಮದ ವಸ್ತುಗಳನ್ನು ವಸ್ತು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದರು. ಅದು ಎಲ್ಲರ ಗಮನಸೆಳೆಯಿತು. ಕಿರು ಉದ್ಯಮಿಗಳಿಗೆ ಒಂದಷ್ಟು ಆದಾಯವು ಬಂತು.

ಸಾಂಸ್ಕೃತಿಕ ಕಾರ್ಯಕ್ರಮಗಳು

 

 

 

ದಕ್ಷಿಣ ಕನ್ನಡದ ಕೊರಗದ ಸಮುದಾಯದವರೇ ಆದ “ಕೊರಲ್ ಕಲಾ ತಂಡ, ಕುಡ್ಲ” ಇವರು ಅಳಿವಿನಂಚಿನಲ್ಲಿರುವ ಕೊರಗ ಸಮುದಾಯ ಮತ್ತು ಅವರ ಸಾಂಸ್ಕೃತಿಕ ಆಚರಣೆಗಳ ಪರಿಚಯವನ್ನು ಅದರ ಶ್ರೀಮಂತಿಕೆವನ್ನು ಯುವಜನ ಹಬ್ಬದಲ್ಲಿ ಉಣಬಡಿಸಿದರು. ಕಾಡಿನಲ್ಲಿ, ಯಾ ಕಾಡಿನಂಚಿನಲ್ಲಿ ಬದುಕುತ್ತಿರುವ ಕೊರಗದ ಸಮುದಾಯದ ಸರಳತೆ, ಪರಿಸರ ಉಳಿಸುವಲ್ಲಿ, ಬೆಳೆಸುವಲ್ಲಿ ಅವರ ಬದ್ಧತೆಯನ್ನು ಹಾಗೂ ಕೊರಗ ಸಮುದಾಯದಲ್ಲಿ ಮಗುವಿನ ಜನನದಿಂದ ಮದುವೆ, ಮರಣದವರೆಗಿನ, ಸಂಭ್ರಮದ ಎಲ್ಲಾ ಹಂತಗಳಲ್ಲಿ ಹಾಡುವ, ಕುಣಿಯುವ ನೃತ್ಯ, ಹಾಡುಗಳು ಯುವಜನರ ಮನಸೂರೆಗೊಂಡಿತ್ತು.

ತದ ನಂತರ ತುಳುನಾಡಿನ ಬಹುಸಂಸ್ಕೃತಿಯನ್ನು ಬಿಂಬಿಸುವ ಹಿಂದು, ಕ್ರಿಶ್ಚಿಯನ್, ಮುಸ್ಲಿಂ, ಹೀಗೆ ಹಾಡುಗಳ ಪೂಷನ್ಗಳಿಗೆ ಸಂವಾದದ ಯುವ ಒಡನಾಡಿಗಳು ಹೆಜ್ಜೆ ಹಾಕಿದರು. ಒಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಇಡೀ ಯುವಜನಹಬ್ಬಕ್ಕೆ ಸುಂದರ ಮುಕ್ತಾಯ ಹಾಡಿತು.

ಫೋಟೋ ಕೌಂಟರ್:

ಎರಡು ದಿನವೂ ಈ ಫೋಟೋ ಕೌಂಟರ್ ಯುವಜನ ಹಬ್ಬದ ನಡೆಯುತ್ತಿದ್ದ ಸಭಾಂಗಣದ ದ್ವಾರದ ಬಳಿ ನಿಲ್ಲಿಸಲಾಗಿತ್ತು. ಅದರಲ್ಲಿ ಸಂವಿಧಾನದ ಕರ್ತವ್ಯಗಳನ್ನು ಬರೆಯಲಾಗಿತ್ತು. ಆ ಕೌಂಟರ್ ಬಳಿ ಪೋಟೋ ತೆಗೆಸಿ ತಮ್ಮ ವಾಟ್ಸಪ್ ಸ್ಟೇಟಸ್ ಆಗಿ ಹಾಕಿದಲ್ಲಿ, ಸಂಜೆಯೊಳಗೆ ಅತ್ಯಂತ ಹೆಚ್ಚು ನೋಡುಗರನ್ನು ತಲುಪಿದಲ್ಲಿ ಅವರಿಗೆ ಬಹುಮಾನ ಘೋಷಿಸಲಾಗಿತ್ತು. ಹಾಗಾಗಿ ಸೋಷಲ್ ಮೀಡಿಯಾದ ಮೂಲಕ ಒಟ್ಟು ಸುಮಾರು ಒಂದು ಸಾವಿರ ಜನರನ್ನು ತಲುಪಲಾಯಿತು. ಹಾಗಾಗಿ ಈ ಕೌಂಟರ್ ಯುವಜನರ ಆಕರ್ಷಣೆಯ ಭಾಗವಾಗಿತ್ತು.

ಯುವಜನ ಹಬ್ಬದ ಒಳನೋಟಗಳು:

ಹಬ್ಬ, ಮೇಳ, ಎಲ್ಲಾ ಕಾರ್ಯಕ್ರಮಗಳು ಹೆಚ್ಚಾಗಿ ಬರೇ ಉದ್ದೂದ್ದ ಭಾಷಣಕ್ಕೆ ಸೀಮಿತವಾಗಿರುತ್ತದೆ. ಹೆಚ್ಚೆಂದರೆ ಕೆಲವು ಸಿನಿಮಾ ಹಾಡಿನ ನೃತ್ಯಗಳಿಗೆ ಸೀಮೀತವಾಗಿರುತ್ತದೆ. ಆದರೆ ಈ ಯುವಜನ ಹಬ್ಬವು ನಮ್ಮ ಕಣ್ಣು, ಮನಸು, ಹೃದಯಕ್ಕೆ ತಲುಪಿತು. ದೃಶ್ಯ, ಕಾವ್ಯ, ನಡೆ, ನುಡಿ ಎನ್ನುವ ಮಾಧ್ಯಮದ ಮೂಲಕ ನಮಗೆ ತಣ್ಣಗೆ ನಮ್ಮ ಸಂವಿಧಾನದಲ್ಲಿರುವ ನಮ್ಮ ಹಕ್ಕುಗಳು, ಕರ್ತವ್ಯಗಳು, ಅದರ ಉದಾತ್ತ ಮೌಲ್ಯಗಳನ್ನು ನಮ್ಮ ಹೃದಯಕ್ಕೆ ರವಾನಿಸಿದೆ ಎಂದು ಡಿಗ್ರಿ ಓದುತ್ತಿರುವ ಯುವಜನ ಪ್ರಜಲ್ವ್ ಪೂಜಾರಿ ಯುವಜನ ಹಬ್ಬಕ್ಕೆ ಪ್ರತಿಕ್ರಿಯಿಸಿದರು.

ಬೇರೆ ಬೇರೆ ಕಾರಣಕ್ಕೆ ಯುವಜನರು ವೇದಿಕೆ ಹತ್ತುವುದಕ್ಕೆ ಭಯ ಪಡುತ್ತಾರೆ. ಆದರೆ ಈ ಹೇಳಿಕೆಯನ್ನು ಅಲ್ಲಗಳೆಯುವಂತೆ, ಎಲ್ಲಾ ಹಿನ್ನೆಲೆಯ ಯುವಜನರು ವೇದಿಕೆ ಹತ್ತಿದ್ದು, ತಮ್ಮ ಪ್ರತಿಭೆ, ಯೋಚನೆಗಳನ್ನು ಸಭಿಕರ ಮುಂದಿಟ್ಟದ್ದು ನಿಜವಾಗಿಯೂ ಇಷ್ಟವಾಯಿತು ಎಂದು ಕದಿಕೆ ಟ್ರಸ್ಟ್ನ ಅಧ್ಯಕ್ಷರಾದ ಶ್ರೀಮತಿ ಮಮತಾ ರೈಯವರು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು.

ಬೇರೆ ಕಾಲೇಜಿನ ಬೇರೆ ಬೇರೆ ಹಿನ್ನಲೆಯ ಇಷ್ಟೊಂದು ಯುವಜನರನ್ನು ಈ ಯುವಜನ ಹಬ್ಬ ಆಕರ್ಷಿಸಿದ್ದು, ಈ ಯುವಜನ ಹಬ್ಬ ಯಶಸ್ಸು ಎಂದು ಸಂವಿಧಾನದ ಮೌಲ್ಯಗಳ ತಾಕತ್ತು ಎಂದು ವಿ೪ ಮಾಧ್ಯಮದ ಪ್ರಧಾನ ಸಂಪಾದಕರಾದ ಶ್ರೀ ತಾರನಾಥಗಟ್ಟಿಯವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಹಕಾರ
ಎರಡೂ ದಿನವೂ ನಮಗೆ ಯುವಜನ ಹಬ್ಬ ನಡೆಸಲು ಉಚಿತವಾಗಿ ಸಭಾಂಗಣ ನೀಡಿ ಯುವಜನ ಹಬ್ಬದ ಯಶಸ್ವಿಗೆ ಸಹಕರಿಸಿದ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜು ಮತ್ತು ಸೂಲ್ಕ್ ಆಫ್ ಸೋಷಲ್ ವರ್ಕ್ ರೋಶನಿ ನಿಲಯ ಮಂಗಳೂರು ಇವರಿಗೆ ಸಂವಾದ ಯುವಸಂಪನ್ಮೂಲ ಕೇಂದ್ರದ ತುಂಬು ಹೃದಯದ ಧನ್ಯವಾದವನ್ನು ವ್ಯಕ್ತಪಡಿಸುತ್ತದೆ.

ಇಂತಹ ಉತ್ತಮ ಕಾರ್ಯಕ್ರಮಕ್ಕೆ ತಮ್ಮ ಕಾಲೇಜಿನಿಂದ ಯುವಿಗಳನ್ನು ಭಾಗವಹಿಸಲು ಪ್ರೇರೇಪಿಸಿದ ಈ ಕೆಳಗಿನ ಕಾಲೇಜಿನ ಪ್ರಾಂಶುಪಾಲರಿಗೆ, ಪ್ರಾದ್ಯಾಪಕ ವೃಂದದವರಿಗೆ ನಾವು ಅಭಾರಿಗಳಾಗಿದ್ದೇವೆ.
• ಸಂತ ಅಲೋಷಿಯಸ್ ಕಾಲೇಜು ಪಿಯಸಿ ಮತ್ತು ಡಿಗ್ರಿ ಕಾಲೇಜು, ಮಂಗಳೂರು.
• ಡಾ.ಪಿ.ದಯಾನಂದ ಪೈ, ಪಿ ಸತೀಶ್ ಪೈ ಸರಕಾರಿ ಪ್ರಥಮ ದಜೇ ಕಾಲೇಜು ಮಂಗಳೂರು,
• ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜು, ಸುಂಕದ ಕಟ್ಟೆ, ಬಜಪೆ, ಮಂಗಳೂರು
• ಸಂತ ಆಗ್ನೇಸ್ ಕಾಲೇಜು ಮಂಗಳೂರು
• ಬೆಸಂಟ್ ಮಹಿಳಾ ಕಾಲೇಜು ಮಂಗಳೂರು
• ಮಹಿಳಾ ಕಾಲೇಜು ಬಲ್ಮಠ, ಮಂಗಳೂರು
• ರೋಶನಿ ನಿಲಯ ಕಾಲೇಜು ಮಂಗಳೂರು

ಅಂತೆಯೇ ಈ ಯುವಜನ ಹಬ್ಬದಲ್ಲಿ ಭಾಗಿಯಾದ ಈ ಕೆಳಗಿನ ಸಂಘಸಂಸ್ಥೆಗಳ ಸಹಕಾರವನ್ನು ಇಲ್ಲಿ ಸಂವಾದ ಸ್ಮರಿಸುತ್ತದೆ.
• ಡೀಡ್ಸ್ ಸಂಸ್ಥೆ ಮಂಗಳೂರು
• ಮಹಿಳಾ ದೌಜನ್ಯ ವಿರೋಧಿ ಮತ್ತು ವೇದಿಕೆ ಮಂಗಳೂರು
• ಕರಾವಳಿ ವಾಚಕರ ಮತ್ತು ಲೇಖಕಿಯರ ಸಂಘ, ಮಂಗಳೂರು

ಎರಡು ದಿನದ ಹಬ್ಬ ನಡೆದ ಸಭಾಂಗಣ, ವೇದಿಕೆ, ಅದರ ಅಸುಪಾಸು ಸ್ಥಳಕ್ಕೆ ಹಬ್ಬದ ಮೆರುಗನ್ನು, ವಾತಾವರಣವನ್ನು ಕಲಾವಿದ ಶ್ರೀ ಮೋಹನ್ ಶೇಣಿಯವರು ತಮ್ಮ ಕೈಚಳಕ, ಕುಶಲತೆಯಿಂದ ಬಹಳ ಅಭಿಮಾನದಿಂದ ಸೃಷ್ಟಿಸಿದರು. ಅವರ ಸೃಜನಾತ್ಮಕ ಕೊಡುಗೆಯನ್ನು ಇಲ್ಲಿ ದಾಖಲಿಸಲು ಸಂತೋಷವೆನಿಸುತ್ತದೆ.

ಮುಕ್ತಾಯ:
ಒಟ್ಟಿನಲ್ಲಿ ಸುಮಾರು ೫೦೦ರಷ್ಟು ಯುವಜನರು ಹಾಗೂ ಇನ್ನಿತರ ಕಾಲೇಜಿನ ಪ್ರದ್ಯಾಪಕರು, ಹಿತೈಷಿಗಳು, ಸಂಘ ಸಂಸ್ಥೆಯ ಸಿಬ್ಬಂದಿಗಳು, ಯುವಜನರ ಪೋಷಕರು ಈ ಹಬ್ಬದಲ್ಲಿ ಭಾಗವಹಿಸಿದರು. ಈ ಯುವಜನ ಹಬ್ಬದಲ್ಲಿ ಸಂವಿಧಾನ ಬದ್ಧವಾದ ಮೌಲ್ಯಗಳು ದೃಶ್ಯ, ನಡೆ, ನುಡಿ ಎಂಬ ಮಾಧ್ಯಮದ ಮೂಲಕ ಅಲ್ಲಲ್ಲಿ ರಿಂಗಣಿಸಿತು. ಯುವಜನರಿಗೆ ತಮ್ಮ ಸಂವಿಧಾನ ಬದ್ಧ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವಂತೆ, ಅನುಸರಿಸುವಂತೆ, ದನಿ ಇಲ್ಲದವರಿಗೆ ದನಿಯಾಗುವಂತೆ ಪ್ರೇರೇಪಿಸಿತು.

ಯುವಜನ ಹಬ್ಬದ ಕೆಲವು ಝಲಕುಗಳು

 

 

 

 

 

 

 

 

 

 

ಸಂವಾದ ಮಂಗಳೂರು
ಮಂಗಳೂರು: ಯುವಜನ ಹಬ್ಬಕ್ಕೆ ಚಾಲನೆ; ಮೊದಲ ದಿನ ಸಿನಿಮಾ ಹಬ್ಬ
Click👉🏻 http://www.varthabharati.in/article/2022_10_28/354505

VARTHA BHARATI

ಕರ್ತವ್ಯಗಳ ಪಾಲನೆ ಮನೆಯಿಂದಲೇ ಆರಂಭವಾಗಲಿ: ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ https://reporterkarnataka.com/2022/10/30/karthvyagala-paalane-mane-endale-aarambha-vagalali-nss-samyojanadikaari-dr/
(https://reporterkarnataka.com/2022/10/30/karthvyagala-paalane-mane-endale-aarambha-vagalali-nss-samyojanadikaari-dr/)

 

 

Comments powered by CComment

Home | About | Sitemap | Contact

Copyright © 2013 - www.sswroshni.in. Powered by eCreators

Contact Us

School of Social Work
Roshni Nilaya, Mangalore- 575 002
Karnataka - India

Tel : 0824-2435791

E-Mail: [email protected]